ಪೊಲೀಸ್ ವೇಷ ಧರಿಸಿದ ಚಿಕ್ಕಣ್ಣ, ವಿಕ್ರಮ್ ಆರ್ಯ
Posted date: 16 Thu, Jul 2015 – 08:42:58 AM

ದ್ಯಾಮಮ್ಮ ದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಾಮದೇವ ಭಟ್ಟರ್ ನಿರ್ಮಿಸುತ್ತಿರುವ ತಲೆಬಾಚಿಕೊಳ್ಳಿ, ಪೌಡರ್ ಹಾಕ್ಕೊಳ್ಳಿ ಚಿತ್ರದ ನಾಯಕ ವಿಕ್ರಮ್ ಆರ್ಯ ಹಾಗೂ ಚಿಕ್ಕಣ್ಣ ಇಬ್ಬರು ಪೊಲೀಸ್ ವೇಷ ಧರಿಸಿ ಬ್ಯಾಂಕಿಗೆ ವಂಚನೆಮಾಡುತ್ತಿದ್ದ ರೋಹಿತ್ ಎಂಬಾತನನ್ನು ಬೆದರಿಸಿದ ಘಟನೆ ನಡೆದಿದೆ.  ಬ್ಯಾಂಕ್ ಮ್ಯಾನೇಜರ್ ರಮೇಶ್‌ಭಟ್ ಅವರನ್ನು ಯಾಮಾರಿಸಿದ ರೋಹಿತ್‌ಗೆ ಬುದ್ಧಿಕಲಿಸಿ ಬ್ಯಾಂಕ್ ಹಣವನ್ನು ವಾಪಸ್ ಮಾಡಿಸಿದ್ದಾರೆ.  ಈ ಮೇಲ್ಕಂಡ ದೃಶ್ಯವನ್ನು ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.  ಇದರೊಂದಿಗೆ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣಗೊಂಡಂತಾಯಿತು.  ನಾಲ್ಕು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.  

    ಎ.ವೇಣುಗೋಪಾಲ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯಭಾರತಿ ಸಂಗೀತ, ಮನುಯಪ್ಲರ್ ಛಾಯಾಗ್ರಹಣ, ಕುಮಾರ್ ಕೊಪ್ಪ ಸಂಕಲನ, ತ್ರಿಭುವನ್ ನೃತ್ಯನಿರ್ದೇಶನ, ಮಾದೇಶ ಮುತ್ತಪ್ಪ ಸಂಭಾಷಣೆ ಮತ್ತು ಸಹ ನಿರ್ದೇಶನ, ಸ್ಟಂಟ್ ಸಿದ್ದು ಸಹಾಸ, ವಿ.ರಾಜಾರಾಂ ನಿರ್ಮಾಣ ನಿರ್ವಹಣೆ ಇದೆ.  ವಿಕ್ರಮ್ ಆರ್ಯ, ಚಿಕ್ಕಣ್ಣ, ನಿಖಿತ, ಅಮಾನ್ ಗ್ರೇವಾಲ್, ಶೋಭರಾಜ್, ರಮೇಶ್ ಭಟ್, ಬುಲೆಟ್ ಪ್ರಕಾಶ್, ಪದ್ಮಜಾರಾವ್, ಮನ್ಮೋಹನ್‌ರೈ, ಕಿಂಗ್ ಮೋಹನ್, ಮೂಗ್‌ಸುರೇಶ್, ಬಿರಾದಾರ್, ಮುಂತಾದವರ ತಾರಾಬಳಗವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed